ಮಠದ ಸಹಕಾರ: ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವ ಕಾರಣದಿಂದಾಗಿ ಶ್ರವಣಬೆಳಗೊಳವನ್ನು ಸಮ್ಮೇಳನದ ಆತಿಥ್ಯಕ್ಕೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಊಟ ಮತ್ತು ವಸತಿಯ ಜವಾಬ್ದಾರಿಯನ್ನು ಜೈನಮಠ ನಿರ್ವಹಿಸಲಿದ್ದು, ಸುಮಾರು 2000 ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಸಮ್ಮೇಳನ ನಡೆಸಲು ಸರ್ಕಾರದಿಂದ 35 ಲಕ್ಷ ರೂಪಾಯಿ ಅನುದಾನ ದೊರೆತಿದೆ ಎಂದೂ
ತಿಳಿಸಿದರು.