ನೀರು ಇಂಗಿಸುವ; ಕೆರೆ–ಕಟ್ಟೆ ತುಂಬಿಸುವ ಕಾರ್ಯ ಆಗಬೇಕು
ಭಾರೀ ಮಳೆ ಬಂದಾಗ ಹಳ್ಳದಲ್ಲಿ ಅಪಾರ ಪ್ರಮಾಣ ನೀರು ಹರಿದು ತುಂಗಾ ಭದ್ರಾ ನದಿ ಸೇರುತ್ತದೆ. ಈ ನೀರನ್ನು ಕೆರೆ–ಕಟ್ಟೆಗಳಿಗೆ ತುಂಬಿಸುವ ಹಾಗೂ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಭೂಮಿಗೆ ಇಂಗಿಸುವ ಕಾರ್ಯ ಆಗಬೇಕು ಎನ್ನುತ್ತಾರೆ ಕೊಂಡಜ್ಜಿ, ಬುಳ್ಳಾಪುರ ಗ್ರಾಮದ ರೈತರಾದ ಮಲ್ಲಿಕಾರ್ಜುನ, ನಟರಾಜ, ಪ್ರಸನ್ನ ಕುಮಾರ್, ಜಿ.ಆರ್. ವೀರೇಶ್ ಇತರರು.