‘ಸಣ್ಣ ವ್ಯಕ್ತಿಗಳು ತಾನು ಹಾಗೂ ತನ್ನ ಪರಿವಾರದ ಬಗ್ಗೆ ಮಾತ್ರ ವಿಚಾರ ಮಾಡುತ್ತಾರೆ. ಆದರೆ, ವಸುಧೈವ ಕುಟುಂಬದ ಮಹತ್ವ ಅರಿತು ಜಗತ್ತನ್ನು ಪ್ರೀತಿಸುವವರು ವಿಶ್ವಕ್ಕೇ ನಾಯಕರಾಗುತ್ತಾರೆ. ಸಣ್ಣ ಮನಸ್ಸಿನಿಂದ ಯಾರೂ ದೊಡ್ಡವಾಗುವುದಿಲ್ಲ. ಒಡೆದ ಮನಸ್ಸು ಯಾರನ್ನೂ ಮೇಲೆತ್ತುವುದಿಲ್ಲ. ಅನೇಕ ಸಾಧು, ಸಂತರನ್ನು ಕಂಡಿರುವ ದಕ್ಷಿಣ ಭಾರತದಿಂದ ದೇಶದ ಸಂಸ್ಕೃತಿ ಉನ್ನತ ಮಟ್ಟಕ್ಕೆ ಏರಿದೆ. ಈ ಭಾಗದ ಜನರಲ್ಲಿ ಮೇಲು, ಕೀಳು, ವರ್ಣ ಭೇದಗಳಿಲ್ಲ. ಬಿಜೆಪಿ ಸಹ ಅದೇ ತತ್ವವನ್ನು ಅನುಸರಿಸುತ್ತಿದೆ’ ಎಂದರು.