ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ, ಮಾಯಸಂದ್ರ ಹೋಬಳಿಗಳಲ್ಲೂ ಏನೂ ಉಳಿದಿಲ್ಲ. ದಂಡಿನಶಿವರ ಹೋಬಳಿಯ ಚಾಕೋಳಿಪಾಳ್ಯ, ನೀರಗುಂದ ಅಜ್ಜೇನಹಳ್ಳಿ, ಚಾಕೇನಹಳ್ಳಿ, ಹೊಳೆಗೇರಹಳ್ಳಿ, ಬಾಣಸಂದ್ರ ಸುತ್ತಮುತ್ತಲ ಭಾಗಗಳಲ್ಲಿನ ತೋಟಗಳ ಕಥೆಯೂ ಭಿನ್ನವಾಗಿಲ್ಲ.
‘ನನಗೀಗ 85 ವರ್ಷವಾಗಿರಬಹುದು. ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ. ಬುದ್ಧಿ ಕಂಡಾಗಿನಿಂದ ತೆಂಗು ಈ ಪಾಟಿ ಒಣಗಿದ್ದನ್ನು ಕಂಡಿಲ್ಲ’ ಎಂದು ಹರಿದಾಸನಹಳ್ಳಿಯ ಗಂಗಣ್ಣ ತಿಳಿಸಿದರು.