ನಾ. ಡಿಸೋಜ ಅಧ್ಯಕ್ಷ?
ಬೆಂಗಳೂರು ವರದಿ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ, ಸಾಹಿತಿಗಳಾದ ನಾ.ಡಿಸೋಜ, ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ.ಹಂ.ಪ. ನಾಗರಾಜಯ್ಯ, ಚಂದ್ರಶೇಖರ ಕಂಬಾರ, ಸಂಶೋಧಕ ಡಾ.ಎಂ.ಎಂ. ಕಲ್ಬುರ್ಗಿ ಅವರ ಹೆಸರು ಕೇಳಿಬರುತ್ತಿವೆ. ಇವರಲ್ಲಿ ನಾ. ಡಿಸೋಜ ಅವರ ಹೆಸರು ಈ ಬಾರಿ ಬಲವಾಗಿ ಕೇಳಿಬರುತ್ತಿದೆ ಎಂದೂ ಮೂಲಗಳು ತಿಳಿಸಿವೆ.