ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಸಾದ್, ‘ಅಕ್ರಮ ಮಾರ್ಗದಿಂದ ನಾನು ನಿವೇಶನ ಪಡೆಯಲು ಬಯಸಿದ್ದರೆ ಹಲವು ವರ್ಷಗಳ ಹಿಂದೆಯೇ ಪಡೆಯುತ್ತಿದ್ದೆ. ವಿದ್ಯಾಸಂಸ್ಥೆಯ ಮೂಲಕ ಕಾಲೇಜು ಆರಂಭಿಸುವ ಉದ್ದೇಶ ಮೊದಲಿನಿಂದಲೂ ಇತ್ತು. ಈ ಉದ್ದೇಶಕ್ಕಾಗಿಯೇ ಅರ್ಜಿ ಸಲ್ಲಿಸಿ ನಿವೇಶನ ಪಡೆದುಕೊಂಡಿದ್ದೆ. ಆದರೆ, ನಿಯಮಗಳ ಪ್ರಕಾರ ನಗರ ಪ್ರದೇಶದಲ್ಲಿ ಕಾಲೇಜು ಆರಂಭಿಸಲು ಒಂದು ಎಕರೆ ಜಾಗ ಬೇಕಿದ್ದರಿಂದ ಮಂಜೂರಾದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿರಲಿಲ್ಲ. ಅಂದು ಹುಡಾ ಸಭೆಯಲ್ಲಿದ್ದ ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ ಅವರು ಇನ್ನೊಮ್ಮೆ ಅರ್ಜಿ ಹಾಕಿರಿ.