ಕೆರೆಯಲ್ಲಿ ಸದ್ಯ ಶೇಕಡ 80ರಷ್ಟು ನೀರು ಸಂಗ್ರಹವಾಗಿದೆ. ಹೂಳು ತೆಗೆಯದಿದ್ದರೆ ಅಲ್ಪಪ್ರಮಾಣದಲ್ಲಿ ನೀರು ನಿಂತು, ಕೋಡಿ ಮೂಲಕ ಹರಿದು ಪೋಲಾಗುತ್ತಿತ್ತು. ಸಂಗ್ರಹವಾಗಿರುವ ನೀರಿಗಿಂತ ಎರಡು–ಮೂರು ಪಟ್ಟು ನೀರು ಅಂತರ್ಜಲ ಸೇರಿದೆ. ಸುತ್ತಲಿನ ಕೊಳವೆಬಾವಿಗಳಲ್ಲಿ ಜೀವಸೆಲೆ ಬಂದಿದೆ. ಇನ್ನೂ ಮೂರು ವರ್ಷಗಳವರೆಗೆ ಕೆರೆಯಲ್ಲಿ ನೀರು ಇರುತ್ತದೆ’ ಎನ್ನುತ್ತಾರೆ ಹೂಳು ತೆಗೆಯುವ ಉಸ್ತುವಾರಿಯಲ್ಲಿ ಒಬ್ಬರಾದ ಜಲಕಾರ್ಯಕರ್ತ ರಮೇಶ ಬಳೂಟಗಿ.