ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿ, ‘ಕಾರಂತರ ಮೂಲ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸ ನಡೆಯಬೇಕು. ಬಾಲವನದಲ್ಲಿ ಪ್ರಕೃತಿ ಪಾಠ ಶಾಲೆ ಕಾರಂತರ ಕನಸಾಗಿತ್ತು. ಇಲ್ಲಿನ ಪ್ರಕೃತಿಯನ್ನು ಕಾರಂತ ಜೈವಿಕ ವನವಾಗಿ ನಿರ್ಮಿಸಬೇಕು. ಕಾರಂತರ ವಿವಿಧ ಚಿತ್ರಗಳ ಗ್ಯಾಲರಿ ನಿರ್ಮಿಸಿ, ಅದಕ್ಕೆ ‘ಹುಚ್ಚು ಮನಸ್ಸಿನ ಹತ್ತು ಮುಖ’ಎಂಬ ಹೆಸರಿಡಬೇಕು. ಯಾವುದೇ ಸಂದರ್ಭದಲ್ಲಿಯೂ ಕಾರಂತರ ಮೂಲ ಆಶಯಗಳಿಗೆಧಕ್ಕೆಯಾಗಬಾರದು’ ಎಂದರು.