‘ಬಹುಜನರ ವರ್ಗ ದೇಶದ ಅಧಿಕಾರ ಹಿಡಿಯಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಾಗಿತ್ತು. ಇಂದು ದೇಶದಾದ್ಯಂತ ಬಿಎಸ್ಪಿಗೆ ಅಪಾರ ಬೇಡಿಕೆ ಇದೆ. ಹಲವು ಪಕ್ಷಗಳ ಮುಖಂಡರು ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ನಮ್ಮ ರಾಜ್ಯವೂ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ಗಡ, ಜಮ್ಮು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿವಿಧ ಪಕ್ಷಗಳ ಮುಖಂಡರು ಬಿಎಸ್ಪಿ ಸಖ್ಯ ಬಯಸಿದ್ದಾರೆ’ ಎಂದರು.