‘ಮತದಾನದ ಕುರಿತು ಯುವಜನರಲ್ಲಿ ಉತ್ಸಾಹ ಕುಗ್ಗಿದೆ ಎಂದು ಬಹಳ ದಿನಗಳಿಂದ ಅನ್ನಿಸುತ್ತಿತ್ತು. ನನ್ನ ಮದುವೆಯಲ್ಲೇ ಏಕೆ ಜಾಗೃತಿ ಮೂಡಿಸುವ ಯತ್ನ ಮಾಡಬಾರದು ಎಂದು ನನ್ನ ತಂದೆಗೆ ಹೇಳಿದ್ದೆ. ಅವರು ಮುತುವರ್ಜಿ ವಹಿಸಿ ವೇದಿಕೆ ನಿರ್ಮಿಸಿಕೊಟ್ಟರು. ತಾಲ್ಲೂಕು ಆಡಳಿತವೂ ಕೈ ಜೋಡಿಸಿದ್ದು ಖುಷಿ ತಂದಿತು’ ಎಂದು ಎರ್ರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಬಿ.ಇ. ಪದವೀಧರರಾದ ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ.