‘ಪತಿ ಆನಂದ ರಾಠೋಡ ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿದ್ದಾರೆ. ಪತಿಯೊಂದಿಗೆ ಪ್ರವಾಸಕ್ಕೆ ತೆರಳುವ ಆಸೆಯನ್ನು ಪೂಜಾ ಹೊಂದಿದ್ದರು. ಆದರೆ, ರಜೆ ಸಿಗದ ಕಾರಣ ಮುಂದಿನ ದಿನಗಳಲ್ಲಿ ರಜೆ ಪಡೆಯುವುದಾಗಿ ಆನಂದ ಪತ್ನಿಗೆ ತಿಳಿಸಿದ್ದರು. ಪತಿ ರಜೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಭಾವಿಸಿದ ಪತ್ನಿ ಅಸಮಾಧಾನಗೊಂಡು ನೇಣಿಗೆ ಶರಣಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.