ಕಾಂಗ್ರೆಸ್ನ ಎರಡು ಸ್ಥಾನಗಳಿಗೆ ಟಿಕೆಟ್ ಪಡೆಯಲು ಪಕ್ಷದಲ್ಲಿ ತೀವ್ರ ಪೈಪೋಟಿ ನಡೆದಿದೆ. ಸಚಿವ ರೋಷನ್ಬೇಗ್, ಕೆ. ರೆಹಮಾನ್ ಖಾನ್, ನಜೀರ್ ಅಹಮದ್, ಸಲೀಂ ಅಹಮದ್, ರಾಣಿ ಸತೀಶ್, ಕೈಲಾಸನಾಥ ಪಾಟೀಲ, ಚೆನ್ನಾರೆಡ್ಡಿ, ಮಾಲಕರಡ್ಡಿ, ಶಾಮನೂರು ಶಿವಶಂಕರಪ್ಪ, ಲೋಕಸಭೆ ಮಾಜಿ ಸ್ಪೀಕರ್ಗಳಾದ ಮೀರಾ ಕುಮಾರ್ ಹಾಗೂ ಶಿವರಾಜ್ ಪಾಟೀಲರು ಪ್ರಯತ್ನ ಆರಂಭಿಸಿದ್ದಾರೆ. ಹೀಗಾಗಿ ಮೂರನೇ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗಿದೆ.