‘13 ವರ್ಷಗಳ ಹಿಂದೆ ಅವರು ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರು ‘ಬ್ಲಡ್ ಥಿನ್ನರ್’ ಔಷಧ ಸೇವಿಸುತ್ತಿರುವುದರಿಂದ ತಕ್ಷಣವೇ ರಕ್ತಸ್ರಾವ ನಿಲ್ಲಿಸುವುದು ಕಷ್ಟವಾಯಿತು. ಜತೆಗೆ ಮಧುಮೇಹ ಕೂಡ ಇದೆ. ಶಸ್ತ್ರಚಿಕಿತ್ಸೆ ನಡೆಸುವುದು ನಮಗೂ ಸವಾಲಾಗಿತ್ತು. ಅವರನ್ನು ತೀವ್ರ ನಿಗಾ ಕೊಠಡಿಗೆ ಸ್ಥಳಾಂತರಿಸಲಾಯಿತು’ ಎಂದರು. ಪುತ್ರ ಡಾ.ರವೀಂದ್ರ ಶೆಟ್ಟಿ ಜತೆ ಮಾತನಾಡಿದ ಅವರು, ‘ಆರಾಮಾಗಿದ್ದೇನೆ, ಧೈರ್ಯವಾಗಿರಿ’ ಎಂದು ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.