‘ಬಾಲ್ಯದಿಂದ ತಂದೆಯ ಕೈ ಸನ್ನೆಯೇ ಹೆಚ್ಚು ಆಕರ್ಷಣೀಯ ಅನ್ನಿಸುತ್ತಿತ್ತು. ಆದರೆ, ಅದು ವೈಕಲ್ಯ ಎಂದು ಅರಿವಾದಾಗ ಮನಸ್ಸಿಗೆ ನೋವಾಯಿತು. ಆದರೆ, ತಾಯಿ ನನಗೆ ಸ್ಫೂರ್ತಿ ತುಂಬಿದರು. ಸಾಧನೆಯ ಹಾದಿಗೆ ಮಾರ್ಗದರ್ಶಿಯಾದರು. ಜೀವನದಲ್ಲಿ ತಂದೆ ತುಂಬಿದ ನೈತಿಕ ಸ್ಥೈರ್ಯ ಮರೆಯಲಾಗದು’ ಎಂದು ಕುಟುಂಬದ ಸದಸ್ಯರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
‘ಹುಟ್ಟಿನಿಂದ ಮಾತು ಬಾರದ ತಂದೆ ಮಹಮ್ಮದ್ ಕುಟ್ಟಿ ನಾಲ್ಕನೇ ತರಗತಿಯಲ್ಲೇ ಶಾಲೆ ಬಿಟ್ಟು, ಕೃಷಿಯಲ್ಲಿ ತೊಡಗಿಸಿಕೊಂಡು. ಮಕ್ಕಳನ್ನು ಓದಿಸಿದರು. ಒಂದು ಎಕರೆಯಲ್ಲಿ ಬಾಳೆ, ತೆಂಗು ಬೆಳೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಾಗೂ ಮಣ್ಣನ್ನು ನಂಬಿದ್ದಾರೆ. ಅವರ ನಂಬಿಕೆ ಹುಸಿಯಾಗಲಿಲ್ಲ’ ಎಂದು ಭಾವುಕರಾದರು.