'ಸಂತ ಕಬೀರ ದಾಸರು ಮತ್ತು ರೊಹಿದಾಸರು ಜಾತಿಯ ಸಂಕೋಲೆಗಳನ್ನು ನಮ್ಮ ಸಮಾಜದಿಂದ ತೆಗೆಯಬೇಕೆಂದು ಪ್ರಯತ್ನ ಮಾಡಿದರು. ಅದೇ ರೀತಿ ಬಸವಣ್ಣ, ಮಾದಾರ ಚನ್ನಯ್ಯ ಮತ್ತು ಇತರೆ ವಚನಕಾರರು ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ತಮ್ಮ ಜೀವನವನ್ನು ಸಮರ್ಪಿಸಿದರು. ಅಡೆತಡೆಗಳ ನಡುವೆಯೂ ಭಾರತ ಜಗತ್ತಿನ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು ಅಂಬೇಡ್ಕರ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅಂಬೇಡ್ಕರ್ ಅವರಿಗೂ ಮುನ್ನ ಮಹಾತ್ಮ ಫುಲೆ ಜಾತಿಯ ತಾರತಮ್ಯದ ವಿರುದ್ಧ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ್ದರು' ಎಂದು ಇತಿಹಾಸ ಮೆಲುಕು ಹಾಕಿದರು.