‘ಅನುಗ್ರಹ’ದಲ್ಲಿ ವಾಸ ಮಾಡಿದರೆ ಅಧಿಕಾರ ಹೊರಟು ಹೋಗುತ್ತದೆ ಎಂಬ ನಂಬಿಕೆಯ ಕಾರಣ, ದೇವೇಗೌಡರ ಕುಟುಂಬ ಈ ತೀರ್ಮಾನ ತೆಗೆದುಕೊಂಡಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕಾವೇರಿ’ಯನ್ನು ಅಧಿಕೃತ ನಿವಾಸವಾಗಿಸಿಕೊಂಡಿದ್ದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ‘ಅನುಗ್ರಹ’ದಲ್ಲೇ ವಾಸವಿದ್ದರು. ವಾಸ್ತುವಿನಲ್ಲಿ ಅಪಾರ ನಂಬಿಕೆ ಹೊಂದಿರುವ ದೇವೇಗೌಡರ ಕುಟುಂಬವು, ಕಾವೇರಿ, ಕೃಷ್ಣಾವನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನಾಗಿಸಿಕೊಳ್ಳಲು ಒಪ್ಪಿಕೊಂಡಿಲ್ಲ. ಆದ್ದರಿಂದ ಮುಖ್ಯ ಕಾರ್ಯದರ್ಶಿ ನಿವಾಸದ ಮೇಲೆ ಕಣ್ಣು ಹಾಕಿದೆ. ವಾಸ್ತು ಸರಿ ಹೋದರೆ ಅದನ್ನೇ ಅಧಿಕೃತ ನಿವಾಸವಾಗಿ ಪಡೆಯಲಿದೆ.