ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಕೃಷ್ಣರಾಜಪೇಟೆ, ಬಸರಾಳು, ಜಿಕೆವಿಕೆ 6 ಸೆಂ.ಮೀ, ಪಿರಿಯಾಪಟ್ಟಣ, ಸೋಮಪುರ 5, ಭದ್ರಾವತಿ, ಎಚ್.ಡಿ.ಕೋಟೆ, ನಾಗಮಂಗಲ, ಶಿರಾ 4, ಮುಂಡಗೋಡ, ಧಾರವಾಡ, ಹಾವೇರಿ, ಶಿರಹಟ್ಟಿ, ಕುಶಾಲನಗರ, ಅಜ್ಜಂಪುರ, ಶಿವನಿ, ಆನೇಕಲ್, ಪಾವಗಡ, ಮಾಗಡಿ 3 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48ಗಂಟೆಗಳ ವರೆಗೆ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.