‘ಭಾನುವಾರ ಬೆಳಿಗ್ಗೆ 9.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಮಹಲ್ ಹೆಲಿಪ್ಯಾಡಿನಿಂದ ಕಾಪ್ಟರ್ ಮೇಲೆ ಹಾರಿತು. ಲಲಿತಮಹಲ್ ಅರಮನೆ, ನಜರಬಾದ್, ಅಂಬಾವಿಲಾಸ ಅರಮನೆಯಿಂದ ಮುಂದೆ ಸಾಗಿದಾಗ ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದೊಂದು ಡಿಕ್ಕಿ ಹೊಡೆದಿದೆ. ಆಕಸ್ಮಿಕವಾಗಿ ಸಂಭವಿಸಿದ ಅವಘಡದಿಂದ ಪ್ರಯಾಣಿಕರು ವಿಚಲಿತರಾಗದಂತೆ ಪೈಲೆಟ್ ನೋಡಿಕೊಂಡಿದ್ದಾರೆ. ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ ಹೆಲಿಪ್ಯಾಡಿಗೆ ಮರಳಿದರು’ ಎಂದು ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸಂಸ್ಥೆ ‘ಪವನ್ ಹನ್ಸ್’ ಮೂಲಗಳು ಮಾಹಿತಿ ನೀಡಿವೆ.