ನವದೆಹಲಿ, ಸೆ. 7– ಮಾಜಿ ದೊರೆಗಳಿಗೆ ನೀಡಿದ್ದ ಮಾನ್ಯತೆ ಹಾಗೂ ಅವರು ಅನುಭವಿಸುತ್ತಿದ್ದ ರಾಜಧನ ಮತ್ತು ಹಕ್ಕುಗಳನ್ನು ತತ್ಕ್ಷಣದಿಂದ ರದ್ದು ಮಾಡುವ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣರ ಪ್ರಕಟಣೆಯನ್ನು ಇಂದು ರಾಜ್ಯಸಭೆಯಲ್ಲಿ ಆಡಳಿತ ಕಾಂಗ್ರೆಸ್ ಮತ್ತು ವಿರೋಧಿ ಎಡಪಕ್ಷಗಳ ಸದಸ್ಯರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.