ಕೆಲ ಅಂದಾಜಿನ ಪ್ರಕಾರ, 2026ರ ವೇಳೆಗೇ ಹಿಮಗಡ್ಡೆಗಳಿಂದ ಮುಕ್ತವಾದ ಸಾಗರ ಕಾಣಬಹುದು. ಅಧ್ಯಯನದ ಮುಖ್ಯ ಲೇಖಕ ಚಾಡ್ ಥ್ಯಾಕರೆ ಅವರು, ‘ಸಾಗರದಲ್ಲಿ ಹಿಮಗಡ್ಡೆಯ ಭಾಗ ಕರಗಿದಾಗ, ಪ್ರಸ್ತುತ ಅಂಧಕಾರದಲ್ಲಿರುವ ನೀರಿನ ಭಾಗ ಸೂರ್ಯ ರಶ್ಮಿಗೆ ತೆರೆದುಕೊಳ್ಳಲಿದೆ. ಈ ಬದಲಾವಣೆ ಪ್ರತಿಫಲನದಲ್ಲಿಯೂ ವ್ಯಕ್ತವಾಗಲಿದೆ. ಜಾಗತಿಕ ಹವಾಮಾನ ಬದಲಾವಣೆ ಪರಿಣಾಮ ಇದಾಗಿದ್ದು, ಇದರಿಂದ ಹಿಮಗಡ್ಡೆಗಳು ಕರಗುವ ಪ್ರಮಾಣವೂ ಹೆಚ್ಚಾಗಲಿದೆ’ ಎಂದರು.