ಅನಾಥಾಶ್ರಮದ ದೇಣಿಗೆ ದುರುಪಯೋಗ ಪ್ರಕರಣ ಸಂಬಂಧ ಜಿಯಾ ಅವರಿಗೆ ಢಾಕಾ ನ್ಯಾಯಾಲಯ ಫೆಬ್ರುವರಿ 8ರಂದು 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅವರ ಪುತ್ರ ತಾರಿಖ್ ರೆಹಮಾನ್ ಮತ್ತು ಇತರ ನಾಲ್ವರು ಆರೋಪಿಗಳಾದ ಕಮಲ್ ಉದ್ದಿನ್ ಸಿದ್ದಿಕಿ, ಸಲಿಮುಲ್, ಶಾರ್ಫುದ್ದಿನ್, ಮೊಮಿನುರ್ ರೆಹಮಾನ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾದಾಗಿನಿಂದಲೂ ಜಿಯಾ ಅವರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.