‘ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದರೆ, ನಮ್ಮ ನಗರಗಳು ಹಾಗೂ ಕೃಷಿಭೂಮಿಗೆ ನೀರಿನ ಕೊರತೆ ಎದುರಾಗುತ್ತದೆ ಎಂದೇ ಅರ್ಥ. ಭೂಮಿ ಒಣಗುತ್ತಿರುವುದರಿಂದ ರೈತರು ಬೆಳೆ ಬೆಳೆಯಲು ಮೊದಲಿಗಿಂತ ಹೆಚ್ಚು ನೀರು ಬಳಸಬೇಕಾಗುತ್ತದೆ. ಜಗತ್ತಿನೆಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದರೆ ಗಂಭೀರ ಪರಿಣಾಮವನ್ನು ಜನ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.