<p><strong>ಒಟ್ಟಾವಾ (ಪಿಟಿಐ):</strong> ‘ಏರ್ ಇಂಡಿಯಾ ವಿಮಾನ 182ರ ಮೇಲೆ 1985ರಲ್ಲಿ ನಡೆದಿದ್ದ ಬಾಂಬ್ ದಾಳಿ ಕೃತ್ಯದ ತನಿಖೆಯು ಈಗಲೂ ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ’ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.</p>.<p>‘ಇದು, ಅತ್ಯಂತ ದೀರ್ಘಕಾಲ ಅವಧಿಯ ಹಾಗೂ ಅತ್ಯಂತ ಸಂಕೀರ್ಣವಾದ ಭಯೋತ್ಪಾದನೆ ಕೃತ್ಯದ ತನಿಖೆಯಾಗಿದೆ’ ಎಂದು ಪೊಲೀಸರು ವ್ಯಾಖ್ಯಾನಿಸಿದ್ದಾರೆ. ವಿಮಾನದ ಮೇಲಿನ ಬಾಂಬ್ ದಾಳಿ ಘಟಿಸಿ 39 ವರ್ಷಗಳು ಗತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಮಾತು ಹೇಳಿದ್ದಾರೆ.</p>.<p>ಕೆನಡಾದ ಮಾಂಟ್ರಿಯಲ್ ಮತ್ತು ನವದೆಹಲಿ ನಡುವಣ ಏರ್ ಇಂಡಿಯಾದ ‘ಕಾನಿಷ್ಕಾ 182’ ವಿಮಾನವು ಜೂನ್ 23, 1985ರಂದು ಲಂಡನ್ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶಕ್ಕೆ 45 ನಿಮಿಷ ಮೊದಲು ಸ್ಫೋಟಗೊಂಡಿತ್ತು. ಒಟ್ಟು 329 ಮಂದಿ ಸತ್ತಿದ್ದು, ಇವರಲ್ಲಿ ಹೆಚ್ಚಿನವರು ಭಾರತ ಮೂಲದ ಕೆನಡಾದವರು. </p>.<p>1984ರಲ್ಲಿ ಸ್ವರ್ಣಮಂದಿರದಲ್ಲಿ ನಡೆದಿದ್ದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೆ ಪ್ರತೀಕಾರವಾಗಿ ಸಿಖ್ ಉಗ್ರವಾದಿಗಳು ಈ ಬಾಂಬ್ ಕೃತ್ಯವನ್ನು ಎಸಗಿದ್ದರು ಎಂದು ಆರೋಪಿಸಲಾಗಿತ್ತು.</p>.<p>ಶುಕ್ರವಾರ ಈ ಕುರಿತು ಹೇಳಿಕೆ ನೀಡಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಸಹಾಯಕ ಕಮಿಷನರ್ ಡೇವಿಡ್ ಟೆಬೌಲ್ ಅವರು, ‘ದೇಶದ ಇತಿಹಾಸದಲ್ಲಿಯೇ ಕೆನಡಿಯನ್ನರ ಜೀವಹಾನಿಗೆ ಕಾರಣವಾದ ಅತಿದೊಡ್ಡ ಭಯೋತ್ಪಾದಕ ಕೃತ್ಯ ಇದಾಗಿತ್ತು’ ಎಂದು ಹೇಳಿದ್ದಾರೆ.</p>.<p>‘ಈ ಕೃತ್ಯದ ತನಿಖೆಯು ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ. ಅದರ ಪರಿಣಾಮವು ಕಾಲ ಕಳೆದಂತೆ ಮಾಸುವುದಿಲ್ಲ. ಭವಿಷ್ಯದ ಪೀಳಿಗೆಗಳ ಮೇಲೂ ಅದರ ಪರಿಣಾಮ ಇರುತ್ತದೆ. ಇಂಥ ಕೃತ್ಯಗಳಿಂದ ಜೀವಕಳೆದುಕೊಳ್ಳುವ ಅಮಾಯಕರನ್ನು ಮರೆಯಲಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಟ್ಟಾವಾ (ಪಿಟಿಐ):</strong> ‘ಏರ್ ಇಂಡಿಯಾ ವಿಮಾನ 182ರ ಮೇಲೆ 1985ರಲ್ಲಿ ನಡೆದಿದ್ದ ಬಾಂಬ್ ದಾಳಿ ಕೃತ್ಯದ ತನಿಖೆಯು ಈಗಲೂ ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ’ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.</p>.<p>‘ಇದು, ಅತ್ಯಂತ ದೀರ್ಘಕಾಲ ಅವಧಿಯ ಹಾಗೂ ಅತ್ಯಂತ ಸಂಕೀರ್ಣವಾದ ಭಯೋತ್ಪಾದನೆ ಕೃತ್ಯದ ತನಿಖೆಯಾಗಿದೆ’ ಎಂದು ಪೊಲೀಸರು ವ್ಯಾಖ್ಯಾನಿಸಿದ್ದಾರೆ. ವಿಮಾನದ ಮೇಲಿನ ಬಾಂಬ್ ದಾಳಿ ಘಟಿಸಿ 39 ವರ್ಷಗಳು ಗತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಮಾತು ಹೇಳಿದ್ದಾರೆ.</p>.<p>ಕೆನಡಾದ ಮಾಂಟ್ರಿಯಲ್ ಮತ್ತು ನವದೆಹಲಿ ನಡುವಣ ಏರ್ ಇಂಡಿಯಾದ ‘ಕಾನಿಷ್ಕಾ 182’ ವಿಮಾನವು ಜೂನ್ 23, 1985ರಂದು ಲಂಡನ್ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶಕ್ಕೆ 45 ನಿಮಿಷ ಮೊದಲು ಸ್ಫೋಟಗೊಂಡಿತ್ತು. ಒಟ್ಟು 329 ಮಂದಿ ಸತ್ತಿದ್ದು, ಇವರಲ್ಲಿ ಹೆಚ್ಚಿನವರು ಭಾರತ ಮೂಲದ ಕೆನಡಾದವರು. </p>.<p>1984ರಲ್ಲಿ ಸ್ವರ್ಣಮಂದಿರದಲ್ಲಿ ನಡೆದಿದ್ದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೆ ಪ್ರತೀಕಾರವಾಗಿ ಸಿಖ್ ಉಗ್ರವಾದಿಗಳು ಈ ಬಾಂಬ್ ಕೃತ್ಯವನ್ನು ಎಸಗಿದ್ದರು ಎಂದು ಆರೋಪಿಸಲಾಗಿತ್ತು.</p>.<p>ಶುಕ್ರವಾರ ಈ ಕುರಿತು ಹೇಳಿಕೆ ನೀಡಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಸಹಾಯಕ ಕಮಿಷನರ್ ಡೇವಿಡ್ ಟೆಬೌಲ್ ಅವರು, ‘ದೇಶದ ಇತಿಹಾಸದಲ್ಲಿಯೇ ಕೆನಡಿಯನ್ನರ ಜೀವಹಾನಿಗೆ ಕಾರಣವಾದ ಅತಿದೊಡ್ಡ ಭಯೋತ್ಪಾದಕ ಕೃತ್ಯ ಇದಾಗಿತ್ತು’ ಎಂದು ಹೇಳಿದ್ದಾರೆ.</p>.<p>‘ಈ ಕೃತ್ಯದ ತನಿಖೆಯು ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ. ಅದರ ಪರಿಣಾಮವು ಕಾಲ ಕಳೆದಂತೆ ಮಾಸುವುದಿಲ್ಲ. ಭವಿಷ್ಯದ ಪೀಳಿಗೆಗಳ ಮೇಲೂ ಅದರ ಪರಿಣಾಮ ಇರುತ್ತದೆ. ಇಂಥ ಕೃತ್ಯಗಳಿಂದ ಜೀವಕಳೆದುಕೊಳ್ಳುವ ಅಮಾಯಕರನ್ನು ಮರೆಯಲಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>