ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶ ದಿವಾಳಿಯ ಅಂಚಿನಲ್ಲಿದೆ. ಆಹಾರ, ಇಂಧನ, ಔಷಧ, ಅಡುಗೆ ಅನಿಲ, ಬೆಂಕಿ ಕಡ್ಡಿಯಿಂದ ಹಿಡಿದು ಶೌಚಾಲಯದ ಕಾಗದದವರೆಗೂ ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದ್ದು, ಇರುವ ಅಲ್ಪಸ್ವಲ್ಪ ದಾಸ್ತಾನಿಗೆ ಜನರು ಸರದಿಯಲ್ಲಿ ಕಾಯುಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಜಿಜಿಜಿ’ (ಗೋಟಾ ಗೋ ಗಾಮಾ (ಗ್ರಾಮ)’ಘೋಷಣೆ ಕೂಗಿದರು.