ಸೇನೆ ಹಾಗೂ ಬೌದ್ಧ ಧರ್ಮೀಯರ ದಾಳಿಯಿಂದ ರೋಹಿಂಗ್ಯಾ ಮುಸ್ಲಿಮರು ದೇಶ ತೊರೆಯುವಂತಾಗಿತ್ತು.ಕಳೆದ ವರ್ಷದ ಆಗಸ್ಟ್ 25ರಂದು ನಡೆದ ದಾಳಿಯಿಂದ ರಾಖೈನ್ ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 7 ಸಾವಿರ ಮುಸ್ಲಿಮರು ಮೃತಪಟ್ಟಿದ್ದರು. ಉಳಿದವರು ಬಾಂಗ್ಲಾದತ್ತ ವಲಸೆ ಬಂದರು. ಈ ವೇಳೆ ಅತ್ಯಾಚಾರ, ದೌರ್ಜನ್ಯ, ಕೊಲೆಗಳು ನಡೆದವು. ಇದಕ್ಕೆ ಸೇನೆಯನ್ನು ಹೊಣೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ. ರೋಹಿಂಗ್ಯಾ ಬಂಡುಕೋರರ ವಿರುದ್ಧ ಮಾತ್ರ ದಾಳಿ ನಡೆಸುವಂತೆ ಸೂಚಿಸಲಾಗಿತ್ತು ಎಂದು ಮ್ಯಾನ್ಮಾರ್ ಸರ್ಕಾರ ಸ್ಪಷ್ಟಪಡಿಸಿತ್ತು.