ಶೆಹಬಾಜ್ ಅವರು ಅರ್ಥವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿಭಾಯಿಸಬೇಕಿದೆ, ಭಯೋತ್ಪಾದನೆಯ ಸವಾಲು ಎದುರಿಸುವ ಹೊಣೆ ಕೂಡ ಅವರ ಮುಂದೆ ಇದೆ. ಈಚೆಗೆ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು ಆರೋಪಿಸಿದ್ದು, ಆ ಪಕ್ಷದ ಪ್ರತಿಭಟನೆಯ ಕಾವನ್ನು ಕೂಡ ಶೆಹಬಾಜ್ ಶಮನಗೊಳಿಸಬೇಕಿದೆ.