ವಾಷಿಂಗ್ಟನ್ (ಪಿಟಿಐ): ಕಳೆದ ವಾರ ನವದೆಹಲಿಯಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿ ಕಾರನ್ನು ಸ್ಫೋಟಿಸಿದ ಘಟನೆ ಕುರಿತು ಇಲ್ಲಿನ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಐಎ) ಭಾರತದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿದೆ.
ಈ ಸಂಚಿನ ಹಿಂದೆ ಇರಾನ್ ಕೈವಾಡ ಇರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ವಿನಿಮಯವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಚಿನ ಹಿಂದೆ ಇರಾನ್ ಕೈವಾಡ ಇರುವ ಸುಳಿವು ಸಿಕ್ಕಿದ್ದರೂ ಈ ಬಗ್ಗೆ ಭಾರತ ಮೌನವಾಗಿರುವ ಬಗ್ಗೆಯೂ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.