<p>‘ಎಲ್ಲಿಗೆ ಹೊರಟ್ರೀ…?’ ರಾಗ ಎಳೆದಳು ಹೆಂಡತಿ. </p><p>‘ಒಂದೊಳ್ಳೆ ಕೆಲಸಕ್ಕೆ ಹೋಗಬೇಕಾದರೆ ಎಲ್ಲಿಗೆ ಅಂತ ಅಡ್ಡ ಬಾಯಿ ಹಾಕಿಬಿಡ್ತೀಯ, ಹೋದ ಕೆಲಸವೇ ಆಗಲ್ಲ’ ಸೋಫಾ ಮೇಲೆ ಕುಳಿತೆ. </p><p>‘ಅಂಥ ಯಾವ ಘನಂದಾರಿ ಕೆಲಸಕ್ಕೆ ಹೋಗ್ತಿದ್ರೋ…’ ವ್ಯಂಗ್ಯವಾಗಿ ಕೇಳಿದಳು. </p><p>‘ರಾಮನಗರ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಕಡೆಗೆ ಒಂದ್ ರೌಂಡ್ ಹಾಕಿ, ಖಾಲಿ ಸೈಟು, ಜಮೀನು ಇದೆಯಾ ಅಂತ ನೋಡ್ಕೊಂಡ್ ಬರೋಕೆ ಹೋಗ್ತಿದ್ದೆ’. </p><p>‘ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಅಂತ ಮಾಡ್ತಾರೆ ಅನ್ನೋ ಕಾರಣಕ್ಕೆ ಅಲ್ಲಿ ಜಾಗ ಖರೀದಿ ಮಾಡೋಕೆ ಹೋಗ್ತಿದಿರಾ?’ ರೂಟ್ಗೆ ಬಂದಳು ಪತ್ನಿ.</p><p>‘ಹೌದೌದು…’ ಉತ್ಸಾಹದಲ್ಲಿ ಎದ್ದೆ. </p><p>‘ಬೆಂಗಳೂರು ಸುತ್ತಮುತ್ತ ಇರೋ 110 ಹಳ್ಳಿಗಳಿಗೇ ಸರಿಯಾಗಿ ಕುಡಿಯೋ ನೀರು ಸಿಗ್ತಿಲ್ಲ, ಇನ್ನು ಅಲ್ಲಿಯವರೆಗೂ ಸರಿಯಾಗಿ ಸೌಲಭ್ಯ ಕೊಡೋಕಾಗುತ್ತೇನ್ರೀ ಇವರ ಕೈಯಲ್ಲಿ...’ </p><p>‘ಇದೆಲ್ಲ ಹೇಳಿ ನನ್ನ ಉತ್ಸಾಹ ಕಳೀಬೇಡ ನೀನು. ಈಗಲೇ ಜಾಗ ಖರೀದಿ ಮಾಡಿಟ್ಟುಕೊಂಡರೆ ಮುಂದೆ ಕೋಟಿ ಕೋಟಿ ದುಡ್ಡು ಮಾಡ್ಕೊಬಹುದು’ ಹೊರಡಲುನುವಾದೆ. </p><p>‘ನೀವು ಖಾಲಿ ಕೈಯಲ್ಲಿ ಹೋಗಿ ಏನ್ ಮಾಡ್ತೀರಾ, ಬೆಳಿಗ್ಗೆಯೇ ಎದುರು ಮನೆ ಗುಜರಾತಿ ಅಂಕಲ್, ಪಕ್ಕದ್ಮನೆ ರಾಜಸ್ಥಾನಿ ಸೇಟು ಅಂಕಲ್ ಸೂಟ್ಕೇಸ್ನಲ್ಲಿ ದುಡ್ಡು ತುಂಬ್ಕೊಂಡೇ ರಾಮನಗರಕ್ಕೆ ಹೋದರು’ ನಕ್ಕಳು. </p><p>‘ಬೆಂಗಳೂರಲ್ಲಂತೂ ಜಾಗದ ರೇಟ್ ಕೇಳೋಹಂಗಿಲ್ಲ. ಇನ್ನು, ರಾಮನಗರವೂ ದುಬಾರಿ ಆಗಿಬಿಡುತ್ತಾ… ಇರಲಿ ಬಿಡು. ಬೆಂಗಳೂರು ದಕ್ಷಿಣ ಅನ್ನೋ ಹೆಸರಿನಿಂದ ಕೈಗಾರಿಕೆಗಳೆಲ್ಲ ಬಂದು ಜನರಿಗೆ ಕೆಲಸ ಸಿಕ್ಕರೆ ಸಾಕು’ ಸಮಾಧಾನದ ದನಿಯಲ್ಲಿ ಹೇಳಿದೆ.</p><p>‘ಎಲ್ಲರಿಗೂ ಒಳ್ಳೆಯದಾದರೆ ಒಳ್ಳೆಯದೇ. ಆದರೆ, ಈ ವಿಷಯ ಮುಡಾ ಹಗರಣ ಮರೆಯುವವರೆಗೂ, ಚನ್ನಪಟ್ಟಣ ಬೈ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಚಾಲ್ತಿಯಲ್ಲಿ<br>ದ್ದರೆ ಯೂಸ್ ಇಲ್ಲ’ ವ್ಯಂಗ್ಯದ ದನಿಯಲ್ಲಿ ಸತ್ಯ ಹೇಳಿದಳು ಪತ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಲ್ಲಿಗೆ ಹೊರಟ್ರೀ…?’ ರಾಗ ಎಳೆದಳು ಹೆಂಡತಿ. </p><p>‘ಒಂದೊಳ್ಳೆ ಕೆಲಸಕ್ಕೆ ಹೋಗಬೇಕಾದರೆ ಎಲ್ಲಿಗೆ ಅಂತ ಅಡ್ಡ ಬಾಯಿ ಹಾಕಿಬಿಡ್ತೀಯ, ಹೋದ ಕೆಲಸವೇ ಆಗಲ್ಲ’ ಸೋಫಾ ಮೇಲೆ ಕುಳಿತೆ. </p><p>‘ಅಂಥ ಯಾವ ಘನಂದಾರಿ ಕೆಲಸಕ್ಕೆ ಹೋಗ್ತಿದ್ರೋ…’ ವ್ಯಂಗ್ಯವಾಗಿ ಕೇಳಿದಳು. </p><p>‘ರಾಮನಗರ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಕಡೆಗೆ ಒಂದ್ ರೌಂಡ್ ಹಾಕಿ, ಖಾಲಿ ಸೈಟು, ಜಮೀನು ಇದೆಯಾ ಅಂತ ನೋಡ್ಕೊಂಡ್ ಬರೋಕೆ ಹೋಗ್ತಿದ್ದೆ’. </p><p>‘ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಅಂತ ಮಾಡ್ತಾರೆ ಅನ್ನೋ ಕಾರಣಕ್ಕೆ ಅಲ್ಲಿ ಜಾಗ ಖರೀದಿ ಮಾಡೋಕೆ ಹೋಗ್ತಿದಿರಾ?’ ರೂಟ್ಗೆ ಬಂದಳು ಪತ್ನಿ.</p><p>‘ಹೌದೌದು…’ ಉತ್ಸಾಹದಲ್ಲಿ ಎದ್ದೆ. </p><p>‘ಬೆಂಗಳೂರು ಸುತ್ತಮುತ್ತ ಇರೋ 110 ಹಳ್ಳಿಗಳಿಗೇ ಸರಿಯಾಗಿ ಕುಡಿಯೋ ನೀರು ಸಿಗ್ತಿಲ್ಲ, ಇನ್ನು ಅಲ್ಲಿಯವರೆಗೂ ಸರಿಯಾಗಿ ಸೌಲಭ್ಯ ಕೊಡೋಕಾಗುತ್ತೇನ್ರೀ ಇವರ ಕೈಯಲ್ಲಿ...’ </p><p>‘ಇದೆಲ್ಲ ಹೇಳಿ ನನ್ನ ಉತ್ಸಾಹ ಕಳೀಬೇಡ ನೀನು. ಈಗಲೇ ಜಾಗ ಖರೀದಿ ಮಾಡಿಟ್ಟುಕೊಂಡರೆ ಮುಂದೆ ಕೋಟಿ ಕೋಟಿ ದುಡ್ಡು ಮಾಡ್ಕೊಬಹುದು’ ಹೊರಡಲುನುವಾದೆ. </p><p>‘ನೀವು ಖಾಲಿ ಕೈಯಲ್ಲಿ ಹೋಗಿ ಏನ್ ಮಾಡ್ತೀರಾ, ಬೆಳಿಗ್ಗೆಯೇ ಎದುರು ಮನೆ ಗುಜರಾತಿ ಅಂಕಲ್, ಪಕ್ಕದ್ಮನೆ ರಾಜಸ್ಥಾನಿ ಸೇಟು ಅಂಕಲ್ ಸೂಟ್ಕೇಸ್ನಲ್ಲಿ ದುಡ್ಡು ತುಂಬ್ಕೊಂಡೇ ರಾಮನಗರಕ್ಕೆ ಹೋದರು’ ನಕ್ಕಳು. </p><p>‘ಬೆಂಗಳೂರಲ್ಲಂತೂ ಜಾಗದ ರೇಟ್ ಕೇಳೋಹಂಗಿಲ್ಲ. ಇನ್ನು, ರಾಮನಗರವೂ ದುಬಾರಿ ಆಗಿಬಿಡುತ್ತಾ… ಇರಲಿ ಬಿಡು. ಬೆಂಗಳೂರು ದಕ್ಷಿಣ ಅನ್ನೋ ಹೆಸರಿನಿಂದ ಕೈಗಾರಿಕೆಗಳೆಲ್ಲ ಬಂದು ಜನರಿಗೆ ಕೆಲಸ ಸಿಕ್ಕರೆ ಸಾಕು’ ಸಮಾಧಾನದ ದನಿಯಲ್ಲಿ ಹೇಳಿದೆ.</p><p>‘ಎಲ್ಲರಿಗೂ ಒಳ್ಳೆಯದಾದರೆ ಒಳ್ಳೆಯದೇ. ಆದರೆ, ಈ ವಿಷಯ ಮುಡಾ ಹಗರಣ ಮರೆಯುವವರೆಗೂ, ಚನ್ನಪಟ್ಟಣ ಬೈ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಚಾಲ್ತಿಯಲ್ಲಿ<br>ದ್ದರೆ ಯೂಸ್ ಇಲ್ಲ’ ವ್ಯಂಗ್ಯದ ದನಿಯಲ್ಲಿ ಸತ್ಯ ಹೇಳಿದಳು ಪತ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>