‘ಅದಲ್ಲ… ಹೊಸ ವರ್ಷ ಎಷ್ಟ್ ಛಲೋ ಇರತೈತಂತ ಕನಸು ಬೀಳಾಕೆಹತ್ತಿತ್ತು. ಹೊಸ ವರ್ಷದಾಗೆ ನಮ್ ಯತ್ನಾಳಮಾಮನ ನಾಲಿಗಿ ಪೂರಾ ಹೊಸಾ ವರ್ಷನ್ ಆಗಿರತೈತಿ. ನುಡಿದರೆ ಮುತ್ತಿನ ಹಾರದಂತೆ ಮಾತಾಡಾಕೆ ಶುರುಮಾಡಿರತಾನೆ. ಕಮಲಕ್ಕನ ಮನಿಯವರು ಎಲ್ಲಾ ಥರದ ಭಿನ್ನಮತ ಮರೆತು, ನಮ್ ವಿಜಿಯಣ್ಣ, ಅಶೋಕಣ್ಣ ಹೇಳಿದಂಗೆ ಕೇಳಿಕೆಂಡು, ನುಡಿದರೆ ಹೈಕಮಾಂಡು ಮೆಚ್ಚಿ ಅಹುದೆನ್ನುವ ಹಂಗೆ ಇರತಾರೆ. ಕೈಪಕ್ಷದವರ ಮನೆವಳಗೂ ಸಿದ್ರಾಮ ಅಂಕಲ್ಲು, ಡೀಕೇಶಣ್ಣ ಕಮಲಕ್ಕನ ಮನಿಯವರಿಗೆ ಮೂರೂಹೊತ್ತು ಬೈಯೂದು ಬಿಟ್ಟು, ಕರುನಾಡಿನ ಸಮಸ್ತಜನದ ಅಭಿವೃದ್ಧಿ ಮಂತ್ರ ಹಾಡತಿರತಾರೆ…’