ಹುಬ್ಬಳ್ಳಿ, ಆ. 9– ಹುಬ್ಬಳ್ಳಿಯ ಕಿತ್ತೂರ ಚೆನ್ನಮ್ಮ– ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸುವ ವಿವಾದದ ಹಿನ್ನೆಲೆಯಲ್ಲಿ ಹುಬ್ಬಳ್ಳಿ– ಧಾರವಾಡ ಪೊಲೀಸರು ಭಾರತೀಯ ಜನತಾ ಪಕ್ಷದ ನಾಯಕರ ಬಂಧನ ಕಾರ್ಯಾಚರಣೆಯನ್ನು ಇಂದು ನಸುಕಿನಲ್ಲಿ ಆರಂಭಿಸಿದ್ದು, ಧ್ವಜಾರೋಹಣ ವಿವಾದದ ಬಿಸಿ ತೀವ್ರಗೊಳ್ಳತೊಡಗಿದೆ. ಒಟ್ಟು 35 ಮಂದಿಯನ್ನು ಬಂಧಿಸಲಾಗಿದೆ.