ಹೈದರಾಬಾದ್, ನ. 29 (ಯುಎನ್ಐ, ಪಿಟಿಐ)– ವಾರಂಗಲ್ಗೆ ಸಮೀಪದ ಉರುಗೊಂಡ ಗ್ರಾಮದಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟಕ್ಕೆ ಇಂದು ಆಂಧ್ರ ಪ್ರದೇಶ ವಿಶೇಷ ಪೊಲೀಸ್ ಪಡೆಗೆ ಸೇರಿದ ಎಂಟು ಮಂದಿ ಪೊಲೀಸರೂ ಸೇರಿದಂತೆ ಹತ್ತು ಮಂದಿ ಬಲಿಯಾಗಿದ್ದಾರೆ. ಗಾಯಗೊಂಡಿರುವ ಇತರ ಹನ್ನೆರಡು ಮಂದಿ ಪೊಲೀಸರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿರುವ ಪೀಪಲ್ಸ್ ವಾರ್ ಗ್ರೂಪ್ಗೆ ಸೇರಿದ ನಕ್ಸಲೀಯರು ನಡೆಸುತ್ತಿರುವ ಚುನಾವಣಾ ಪೂರ್ವ ಹಿಂಸಾಚಾರದಲ್ಲಿ ಇದು ಎರಡನೇ ಭೀಕರ ಘಟನೆಯಾಗಿದೆ.