ಬೊಫೋರ್ಸ್ ಹಗರಣಕ್ಕೆ ಮತ್ತೆ ಜೀವ ಭಟ್ನಾಗರ್ ವಿರುದ್ಧ ತನಿಖೆಗೆ ಅಸ್ತು
ನವದೆಹಲಿ, ಏ. 29 (ಪಿಟಿಐ)– ಮಾಜಿ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್ ಅವರನ್ನು ವಿಚಾರಣೆಗೆ ಗುರಿಪಡಿಸಲು ಕೇಂದ್ರದ ಅನುಮತಿ ಪಡೆಯುವುದರೊಂದಿಗೆ ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೈಗೆತ್ತಿಕೊಂಡಿರುವ ಸತ್ಯಶೋಧನಾ ಕಾರ್ಯಾಚರಣೆಗೆ ಮಹತ್ವದ ಚಾಲನೆ ದೊರೆತಿದೆ.