ಬೆಂಗಳೂರು, ಮೇ 15– ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಗುರಿ ಸಾಧನೆಯಲ್ಲಿ ಹಿಂದೆ ಬಿದ್ದಿರುವುದನ್ನು ಅಂಕಿಅಂಶಗಳೇ ಎತ್ತಿ ಹೇಳಿರುವುದರಿಂದ ನಿಷ್ಕ್ರಿಯ ಸರ್ಕಾರಕ್ಕಿಂತ ಕೆಲಸ ಮಾಡುವ ಸರ್ಕಾರದ ಆಯ್ಕೆ ಮಾಡಲು ಜನತೆಗೆ ಚುನಾವಣೆ ಅವಕಾಶ ಕಲ್ಪಿಸಿದೆ ಎಂದು ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜನಾರ್ಧನ ಪೂಜಾರಿ ಅವರು ಇಂದು ಇಲ್ಲಿ ತಿಳಿಸಿದರು.