ನವದೆಹಲಿ, ಮೇ 25 – ಕೇವಲ ಎರಡು ಗಂಟೆಗಳ ಕಾಲ ನಡೆದ ಒಂದು ದಿನದ ವಿಶೇಷ ಎಐಸಿಸಿ ಅಧಿವೇಶನವು ಮತ್ತೆ ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡ ಸೋನಿಯಾ ಗಾಂದಿ ಅವರ ಸಾರಥ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ನಿರ್ಣಯ ಕೈಗೊಂಡಿತು.
ಈ ನಿರ್ಣಯದ ನಂತರ ಭಾವೋದ್ವೇಗದಿಂದ ಹಿಂದಿ ಮತ್ತು ಆಂಗ್ಲ ಭಾಷೆಗಳ ಭಾಷಣವನ್ನು ಓದಿದ ಸೋನಿಯಾ ಗಾಂದಿ ಅವರು ತಮ್ಮನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಯನ್ನಾಗಿ ಬಿಂಬಿಸುವ ಬಗ್ಗೆ ಒಲವು ತೋರಲಿಲ್ಲ.