ಹುಬ್ಬಳ್ಳಿ: ಬಸ್ಗೆ ಬೆಂಕಿ ಕಲ್ಲೆಸೆತ, ಹಿಂಸಾಚಾರ
ಹುಬ್ಬಳ್ಳಿ, ಏ. 7– ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವ ಯತ್ನ, ಸರ್ಕಾರಿ ಕಚೇರಿಗಳ ಮೇಲೆ ಕಲ್ಲು ತೂರಾಟ, ವಾಹನಗಳ ಚಕ್ರದ ಗಾಳಿ ಬಿಡುವುದು, ಮಹಿಳೆಯರಿಂದ ರಸ್ತೆತಡೆ ಮೊದಲಾದ ಚಟುವಟಿಕೆಗಳಿಂದಾಗಿ, ಹೈಕೋರ್ಟ್ ಪೀಠಕ್ಕಾಗಿ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಇಲ್ಲಿ ನಡೆಯುತ್ತಿರುವ ಚಳವಳಿ ಇಂದು ಉಗ್ರ ಸ್ವರೂಪ ತಾಳಿತು.