ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಹುಬ್ಬಳ್ಳಿ: ಬಸ್‌ಗೆ ಬೆಂಕಿ ಕಲ್ಲೆಸೆತ, ಹಿಂಸಾಚಾರ

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಸ್‌ಗೆ ಬೆಂಕಿ ಕಲ್ಲೆಸೆತ, ಹಿಂಸಾಚಾರ

ಹುಬ್ಬಳ್ಳಿ, ಏ. 7– ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಹಾಗೂ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವ ಯತ್ನ, ಸರ್ಕಾರಿ ಕಚೇರಿಗಳ ಮೇಲೆ ಕಲ್ಲು ತೂರಾಟ, ವಾಹನಗಳ ಚಕ್ರದ ಗಾಳಿ ಬಿಡುವುದು, ಮಹಿಳೆಯರಿಂದ ರಸ್ತೆತಡೆ ಮೊದಲಾದ ಚಟುವಟಿಕೆಗಳಿಂದಾಗಿ, ಹೈಕೋರ್ಟ್‌ ಪೀಠಕ್ಕಾಗಿ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಇಲ್ಲಿ ನಡೆಯುತ್ತಿರುವ ಚಳವಳಿ ಇಂದು ಉಗ್ರ ಸ್ವರೂಪ ತಾಳಿತು.

ದೇಶಪಾಂಡೆ ನಗರದಲ್ಲಿ ಪ್ರಯಾಣಿಕರ ಬಸ್‌ ಒಂದಕ್ಕೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದು, ಭಾಗಶಃ ಸುಟ್ಟುಹೋದ ವರದಿಯಾಗಿದೆ. ಅದೇರೀತಿ ನ್ಯಾಯಾಲಯದ ಸಂಕೀರ್ಣಕ್ಕೆ ಆಗಮಿಸಿದ್ದ ತಹಶೀಲ್ದಾರರ ಜೀಪಿಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಬೆಂಕಿ ಹಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT