ವಿದ್ಯುಚ್ಛಕ್ತಿ ಮಂಡಳಿಯ ಆಯವ್ಯಯ ಪಟ್ಟಿಯ ಮೇಲೆ ನಿನ್ನೆ ಮತ್ತು ಇಂದು ನಡೆದ ಚರ್ಚೆಯಲ್ಲಿ ವ್ಯಕ್ತವಾದ ಟೀಕೆಗಳನ್ನು ಪ್ರಸ್ತಾಪಿಸಿ, ವಲಯ ತಾರತಮ್ಯದ ಧ್ವನಿಯೆತ್ತಿದ ಸದಸ್ಯರನ್ನು ತಮ್ಮ ಉತ್ತರದಲ್ಲಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಗಳು ‘ಆ ಪ್ರದೇಶ ಮುಂದುವರೆದಿದೆ, ಈ ಪ್ರದೇಶ ಹಿಂದುಳಿದಿದೆ ಎಂದು ಹೇಳುವವರು ಅದನ್ನು ರಾಜಕೀಯ ದೃಷ್ಟಿಯಿಂದ ಹೇಳುತ್ತಿದ್ದಾರೆ ಎಂದು ಗೊತ್ತಾಗಿದೆ. ಇದು ತುಂಬಾ ವಿಷಾದಕರ’ ಎಂದರು.