ಸಂತಸ, ವಿರೋಧಪ್ರದರ್ಶನದ ಮಧ್ಯೆ ಮಲಪ್ಪುರಂ ಉದಯ
ಮಲಪ್ಪುರಂ, ಜೂನ್ 16– ಸಂತಸ, ಸಂಭ್ರಮ ಮತ್ತು ವಿರೋಧ ಪ್ರದರ್ಶನಗಳ ನಡುವೆ ವಿವಾದಿತ ಮಲಪ್ಪುರಂ ಜಿಲ್ಲೆ ಇಂದು ಉದಯಿಸಿತು. ನೂತನ ಜಿಲ್ಲಾಧಿಕಾರಿ ಕೆ. ಭಾಸ್ಕರನ್ ನಾಯರ್ ಅವರು ಅಧಿಕಾರ ವಹಿಸಿಕೊಂಡಾಗ ಇಂದು ಬೆಳಿಗ್ಗೆ 9.55 ಗಂಟೆಗೆ ಸರಿಯಾಗಿ ಕೇರಳದ ಈ ಹತ್ತನೇ ಜಿಲ್ಲೆ (ಮುಸ್ಲಿಂ ಪ್ರಧಾನ) ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂತು. ಆನಂತರ ಜಿಲ್ಲಾಧಿಕಾರಿ ತಮ್ಮ ಕಚೇರಿ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿದರು.