ಅಹಿಂಸಾ ಪಥದಲ್ಲಿ ಸಾಗುವಂತೆ ಜನತೆಗೆ ದೈವಾನುಗ್ರಹ ಕೋರಿ ಬಾದ್ಷಾಖಾನ್ ಉಪವಾಸ ಅಂತ್ಯ
ನವದೆಹಲಿ, ಅ. 6– ದೇಶದಲ್ಲಿನ ‘ಹಿಂಸೆ, ದ್ವೇಷ, ದಬ್ಬಾಳಿಕೆ’ಗಳ ವಾತಾವರಣದ ವಿರುದ್ಧ ಪ್ರಾಯಶ್ಚಿತ್ತಾರ್ಥವಾಗಿ ಕೈಗೊಂಡಿದ್ದ ಮೂರು ದಿನಗಳ ಉಪವಾಸವನ್ನು ಗಡಿನಾಡು ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಇಂದು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿ ಮುಕ್ತಾಯಗೊಳಿಸಿದರು.