ಧರಣಿ ಮುಕ್ತಾಯ: ಸೊಂಡೂರು ಪ್ರಕರಣ– ನ್ಯಾಯಾಂಗ ತನಿಖೆಗೆ ಸರ್ಕಾರದ ಒಪ್ಪಿಗೆ
ಬೆಂಗಳೂರು, ಏ. 26– ಸೊಂಡೂರಿನ ಶ್ರೀ ವೈ. ತಿಮ್ಮಪ್ಪ ಅವರ ಬಂಧನಕ್ಕೆ ಕಾರಣವಾದ ‘ಸಂದರ್ಭ’ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗಾಧಿಕಾರಿಯಿಂದ ವಿಚಾರಣೆ ನಡೆಸಲು ಸರ್ಕಾರ ಒಪ್ಪಿದ ಕಾರಣ, ನಿನ್ನೆ ಆರಂಭವಾದ ವಿಧಾನಸಭೆಯ ವಿರೋಧಿ ಸದಸ್ಯರ ಧರಣಿ ಇಂದು ಮುಕ್ತಾಯವಾಯಿತು.
ಆನಂತರ ಸಭೆಯಲ್ಲಿ ಶಾಂತ ವಾತಾವರಣ ಉಂಟಾಗಿ ದಿನದ ಕಾರ್ಯಕ್ರಮ ನಡೆಯಿತು.