ಪಿಎಸ್ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಒತ್ತಾಯ
ಬೆಂಗಳೂರು, ಫೆ. 17– ರಾಜ್ಯದ ಮತ್ತು ಕೇಂದ್ರ ಸರ್ಕಾರದ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ
ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶವಿರಬೇಕೆಂದು ಅಖಿಲ ಕರ್ನಾಟಕ ಕನ್ನಡ ಮಾಧ್ಯಮವಿದ್ಯಾರ್ಥಿಗಳ ಸಮ್ಮೇಳನ ಇಂದು ಇಲ್ಲಿ ಆಗ್ರಹಿಸಿದೆ.
ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾದರೆ ರಾಷ್ಟ್ರವು ಹರಿದು ಹಂಚಿ ಹೋಗಲಿದೆ ಎಂಬ ಆಂಗ್ಲಭಾಷಾ ಪ್ರೇಮಿಗಳ ವಾದ ಅರ್ಥವಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನಿಷ್ಠ ಐದು ವರ್ಷಗಳ ಕಾಲ ಶಿಕ್ಷಣ ಶುಲ್ಕ ವಿನಾಯಿತಿ ನೀಡಲು ಅದು ಒತ್ತಾಯಪಡಿಸಿದೆ.