ಮುಷ್ಕರದ ಬಿಸಿ: ಆಹಾರ ಪದಾರ್ಥಗಳ ಬೆಲೆ ಏರಿಕೆ
ನವದೆಹಲಿ, ಮೇ 11– ರೈಲ್ವೆ ನೌಕರರ ರಾಷ್ಟ್ರವ್ಯಾಪಿ ಮುಷ್ಕರ ಇಂದು 4ನೇ ದಿನಕ್ಕೆ ಕಾಲಿಟ್ಟಂತೆ ದೇಶದ ವಿವಿಧ ಭಾಗಗಳ ಜನತೆಗೆ ಮುಷ್ಕರದ ಬಿಸಿ ತಾಕುತ್ತಿರುವ ಅನುಭವವಾಗುತ್ತಿದೆ.
ದೆಹಲಿ ಮತ್ತು ಬಿಹಾರಗಳಲ್ಲಿ ಆಹಾರ ಧಾನ್ಯಗಳ ಬೆಲೆ ಏರಿದೆ. ರೈಲು ಸಂಚಾರ ಅಸ್ತವ್ಯಸ್ತ
ಗೊಂಡಿರುವ ಕಾರಣ ಅನೇಕ ಕಡೆಗಳಲ್ಲಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗಿದೆ.
ಪೂರ್ವ ಮತ್ತು ಆಗ್ನೇಯ ರೈಲ್ವೆ ವಿಭಾಗಗಳಲ್ಲಿ ರೈಲು ಸಂಚಾರ ಸ್ಪಲ್ಪ ಸುಧಾರಿಸಿದೆ. ಆದರೆ, ಅರ್ಥವ್ಯವಸ್ಥೆ ಮೇಲೆ ದುಷ್ಪರಿಣಾಮ ಆಗಿದೆ ಎಂದು ಕಲ್ಕತ್ತದಿಂದ ಬಂದ ವರದಿ ತಿಳಿಸಿದೆ.