ಕೃಷಿ ಭೂಮಿ ಮೇಲೆ ಎಕರೆಗೆ ಸಾವಿರ ರೂ. ಅಭಿವೃದ್ಧಿ ತೆರಿಗೆ; ಸದ್ಯದಲ್ಲೇ ವಿಧೇಯಕ
ಬೆಂಗಳೂರು, ಏ. 2– ನೂರಾರು ಕೋಟಿ ರೂಪಾಯಿಗಳ ಸರ್ಕಾರಿ ಹಣದ, ನೀರಾವರಿ ಯೋಜನೆಗಳ ಫಲ ಪಡೆದುಶ್ರೀಮಂತವಾಗಿರುವ ಕೃಷಿ ಜಮೀನಿನ ಮೇಲೆ ‘ಎಕರೆಗೆ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ’ ಅಭಿವೃದ್ಧಿ ತೆರಿಗೆಯನ್ನು ವಿಧಿಸಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ವಿಧೇಯಕವೊಂದನ್ನು ವಿಧಾನಸಭೆಯ ಈ ಅಧಿವೇಶನದಲ್ಲಿಯೇ ತಾವು ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸದನದಲ್ಲಿ ಪ್ರಕಟಿಸಿದರು.