ಸಂಸ್ಥೆಯ ಸುಧಾರಣೆಗೆ ಸರ್ವ ಯತ್ನ ವರದಿ: ಎಸ್.ವಿ. ಜಯಶೀಲರಾವ್
ಲಾಲ್ಬಹಾದುರ್ ನಗರ, ಜ. 11– 1967ರ ಚುನಾವಣೆಗಳ ಅನಂತರದ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುವಂತೆ ಸಂಸ್ಥೆಯನ್ನು ಸುಧಾರಿಸುವ ಭರವಸೆಯನ್ನು ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ನೀಡಿದ ಬಳಿಕ, 71ನೆ ಕಾಂಗ್ರೆಸ್ ಅಧಿವೇಶನ ಇಲ್ಲಿ ಇಂದು ಮಧ್ಯಾಹ್ನ 12.45 ಗಂಟೆಗೆ ಮುಕ್ತಾಯವಾಯಿತು.