ನಗರದಲ್ಲಿ ಮೂರು ಕಡೆ ಗೋಲಿಬಾರ್: ಐವರ ಸಾವು
ಬೆಂಗಳೂರು, ಜ. 23– ಬಸ್ಗಳ ದಹನ, ಕಲ್ಲಿನ ಸುರಿಮಳೆ, ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರಗಳ ಪ್ರಕ್ಷುಬ್ಧ ವಾತಾವರಣದಲ್ಲಿ ಪೋಲೀಸರಿಂದ ಅನೇಕ ಬಾರಿ ಗೋಳಿಬಾರು ನಡೆದು, ಐವರು ಸತ್ತು ಹಲವಾರು ಮಂದಿ ಗಾಯಗೊಂಡು ಬೆಂಗಳೂರು ಇತ್ತೀಚಿನ ಇತಿಹಾಸದಲ್ಲಿ ಭಯಾನಕ ಅನುಭವಕ್ಕೊಳಗಾಯಿತು.