ಮೈಸೂರು, ಫೆ. 11– ಯಾವುದೇ ರಾಜ್ಯಕ್ಕೂ ಹೆಚ್ಚು ಕಹಿ ಹಾಗೂ ತೀವ್ರ ಅಸಮಾಧಾನ ಆಗದಂತೆ ಮೈಸೂರು– ಮಹಾರಾಷ್ಟ್ರ– ಕೇರಳ ಗಡಿ ವಿವಾದವನ್ನು ಬಗೆಹರಿಸಬೇಕಾದ ಬಗ್ಗೆ ಇಂದು ಇಲ್ಲಿ ಒತ್ತಿ ಹೇಳಿದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು, ಕಾವೇರಿ ಜಲವಿವಾದದ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರ ಮಿತಿ ಕುರಿತು ಸ್ಪಷ್ಟೀಕರಿಸಿದರು.