ಮದರಾಸ್, ಡಿ. 30– ಎರಡನೆ ವಿಶ್ವ ತಮಿಳು ಸಮ್ಮೇಳನದಲ್ಲಿ ಭಾಗವಹಿಸಲು ಜನವರಿ 2 ರಂದು ಇಲ್ಲಿಗೆ ಆಗಮಿಸಲಿರುವ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರ ಎದುರು ಕಪ್ಪುಬಾವುಟ ಪ್ರದರ್ಶಿಸಲು ‘ನಾವ್ ತಮಿಳರ್’ ಪಕ್ಷದ ಮದರಾಸ್ ಶಾಖೆಯು ನಿರ್ಧರಿಸಿದೆ. ಡಿಸೆಂಬರ್ 25 ರಂದು ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.