* ಸರಕಾರದಿಂದಲೇ ಆಹಾರಧಾನ್ಯ ವಹಿವಾಟು ಅಸಾಧ್ಯ: ಜಗಜೀವನ ರಾಂ
ನವದೆಹಲಿ, ಜೂ. 30 – ದೇಶದಲ್ಲಿ ಇಂದಿನ ಆಹಾರ ಧಾನ್ಯ ಉತ್ಪಾದನೆಯ ಸ್ಥಿತಿಯಲ್ಲಿ ಸರಕಾರವೇ ಪೂರ್ಣ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸಗಟು ಅಥವಾ ಚಿಲ್ಲರೆ ವ್ಯಾಪಾರ ನಡೆಸುವುದು ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ಆಹಾರ ಖಾತೆ ಸಚಿವ ಜಗಜೀವನ ರಾಂ ತಿಳಿಸಿದರು.