‘ಪ್ರಕಾಶ್ ರೈ ಮಾತನಾಡಿದ್ದ ಸ್ಥಳ ಸ್ವಚ್ಛತೆ’ (ಪ್ರ.ವಾ., ಜ.16) ವರದಿ ಓದಿ ಬೇಸರ ವೆನಿಸಿತು. ಇಂದಿನ ತಂತ್ರಜ್ಞಾನ ಯುಗದಲ್ಲೂ ಇಂತಹ ಅರ್ಥವಿಲ್ಲದ ಕಾರ್ಯಕ್ರಮಗಳು ನಡೆಯುತ್ತಿರುವುದು ಆತಂಕ ಮೂಡಿಸುತ್ತದೆ. ಪ್ರಕಾಶ್ ರೈ ಅವರು ಆಡಿದ ಮಾತುಗಳು ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಹಿಡಿಸಲಿಲ್ಲ ಎಂದಾದರೆ, ಅವುಗಳನ್ನು ಅಲಕ್ಷಿಸಬೇಕಿತ್ತು. ಇಲ್ಲವೇ ಅವರ ಮಾತುಗಳಿಗೆ ತಕ್ಕ ಉತ್ತರ ಕೊಡಬೇಕಿತ್ತು. ಅದನ್ನು ಬಿಟ್ಟು ಮಠದ ಆವರಣ ತೊಳೆದರೆ ಏನಾಗಬಲ್ಲದು?