ಈ ಸಣ್ಣ ಕಥೆ ಎಲ್ಲ ಕಾಲಕ್ಕೂ ಪ್ರಸ್ತುತ ಎನ್ನುವುದಕ್ಕೆ ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ, ಎರಡು ಸಮುದಾಯಗಳ ಮಧ್ಯೆ ಗಲಭೆಯಿಂದಾಗಿ 29 ವರ್ಷಗಳಿಂದ ಇದ್ದ ವೈಮನಸ್ಸಿನ ಗೋಡೆಯನ್ನು ಒಡೆದು, ಮನಸ್ಸುಗಳನ್ನು ಬೆಸೆಯಲು ‘ಭಾರತ್ ಜೋಡೊ’ ರಸ್ತೆಯನ್ನು ನಿರ್ಮಿಸಿರುವುದು (ಪ್ರ.ವಾ., ಅ. 3) ಶ್ಲಾಘನೀಯ. ನಾವೆಲ್ಲರೂ ಆ ಬಡಗಿಯ ಮನಃಸ್ಥಿತಿಯಂತೆ ಪರಸ್ಪರ ಸಮುದಾಯಗಳಾದ್ಯಂತ ಸಹಿಷ್ಣುತೆ ಮತ್ತು ಸಮ್ಮಿಲನ ಮನೋಭಾವದ ರಸ್ತೆಯನ್ನು ನಿರ್ಮಿಸಿದಾಗ ಮಾತ್ರ, ನಮ್ಮ ವೈವಿಧ್ಯಮಯ ಸಮುದಾಯಗಳ ನಡುವೆ ಶಾಶ್ವತವಾದ ಸಾಮರಸ್ಯ ಸಾಧ್ಯವಾಗುತ್ತದೆ. ಇದು, ಮನುಕುಲದಲ್ಲಿ ಏಕತೆಯನ್ನು ರೂಪಿಸಲು ಇರುವ ಏಕೈಕ ಮಾರ್ಗ.