‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಜಗದಲಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು’ ಎಂದು ದಾಸರು ಹೇಳಿರುವ ಸಾಲುಗಳು, ಇಂದಿನ ನಮ್ಮ ವಿಧಾನಸೌಧಕ್ಕೆ ಹೇಳಿ ಮಾಡಿಸಿದಂತೆ ಹೊಂದುತ್ತಿವೆ. ನಾಡನ್ನು ಆಳಬೇಕಾದ, ಪ್ರಜಾಹಿತ ಕಾಯಬೇಕಾದ ನಾಯಕರ ಈ ಕಲಹ, ಕಿತ್ತಾಟ, ಅಧಿಕಾರದ ಹುಚ್ಚು ಓಟಕ್ಕೆ ಬಲಿಯಾಗುತ್ತಿರುವುದು ಅಮಾಯಕ ಜನರೇ ಹೊರತು ಜನಪ್ರತಿನಿಧಿಗಳಲ್ಲ. ಜನರ ಸೇವೆ ಮಾಡಲು ಬಂದವರು ನಾವು ಎಂಬ ಭಾವನೆ ಕಿಂಚಿತ್ತೂ ಇಲ್ಲದಂತೆ ನಮ್ಮ ಕೆಲವು ಶಾಸಕರು ನಡೆದುಕೊಂಡಿದ್ದಾರೆ.